ಬೆಂಗಳೂರು ಮಹಾನಗರ ಪಾಲಿಕೆ == ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ-2010 : == ಫಲಿತಾಂಶ : ಮತದಾನದ ದಿನಾಂಕ : ೨೮-೦೩ ೨೦೧೦ ಎಣಿಕೆ : ೫-೦೪-೨೦೧೦ ಸೋಮವಾರ ಬಿಬಿಎಮ್‌ಪಿ:ರಾಜಕೀಯ ಪಕ್ಷಗಳ ಬಲಾಬಲ : ಆಧಾರ:ಚುನಾವಣಾಕಮಿಶನ್-ವರದಿ ಪ್ರಜಾವಾಣಿ; ೬-೦೪-೨೦೧೦/6-04-2010ಮಂಗಳವಾರ == ಪಾಲಿಕೆಯ ಸಮಸ್ಯೆಗಳು == ಬೆಂಗಳೂರು ಅಗಾಧ ವೇಗದಿಂದ ಬೆಳೆಯುತ್ತಿರವ ನಗರ.¨ಅದು ಬೆಳೆದಂತೆಲ್ಲಾ ಅದರ ಸಮಸ್ಯಗಳೂ ಬೆಳೆಯುತ್ತಿವೆ.ವಾಹನ ದಟ್ಟಣೆಯ ಸಮಸ್ಯೆ, ವಾಯುಮಾಲಿನ್ಯ, ರಸ್ತೆ ನಿರ್ವಹಣೆ ಮತ್ತು ನಿರ್ಮಾಣ,ಕಸ ವಿಲೇವಾರಿ, ಕುಡಿಯುವ ನೀರನ್ನು ಒದಗಿಸುವುದು ಇತ್ಯಾದಿ. ಇತ್ತೀಚೆಗೆ ಕಸ ವಿಲೇವಾರಿ ದೊಡ್ಡ ಸಮಸ್ಯೆಯಾಗಿದೆ. ಹತ್ತಿರದ ಮಂಡೂರು, ಮಾವಳ್ಳಿ ಪುರ,ಎಸ್ಬಿಂಗಿಪ್ರದ ಹತ್ತಿರ ಸ್ಥಳದಲ್ಲ ಕಸ ವಿಲೇವಾರಿ ಮಾಡುತ್ತಿದ್ದು ಈಗ ಅವರು ಅದರ ಕೆಟ್ಟ ವಾಸನೆ ತಡೆಯಲಾರದೆ ತಕರಾರು -ವಿರೋಧ- ಪ್ರತಿಭಟನೆ ಮಾಡಲು ಆರಂಭಿಸಿದ್ದಾರೆ. ಬೆಂಗಳೂರಿನ ಕಸ ನಿರ್ವಹಣೆ ದೊಡ್ಡ ಸಮಸ್ಯಯಾಗಿ ಅನೇಕ ಕಡೆ ವಾರ್ಡಡುಗಳಲ್ಲಿ ಕಸ ವಿಲೇವಾರಿ ಆಗದೆ ಅನೇಕ ವಾರ್ಡುಗಳು ಕೆಟ್ಟವಾಸನೆಯ ಕಷ್ಟ ಅನುಭವಿಸುತ್ತಿದೆ. ಹತ್ತಿರದ ಮಂಡೂರು, ಮಾವಳ್ಕಿ ಪುರ, ಎಸ್.ಬಿಂಗಿಪುರ ಈ ಗ್ರಾ ಮಗಳಹತ್ತಿರ ಕಸ ವಿಲೇವಾರಿಮಾಡಲು ಹಳ್ಳಿಗರು ತಕರಾರುತೆಗೆದಿದ್ದಾರೆ. ಆದುನಿಕ ತಂತ್ರಜ್ಞಾನ ಅಳವಡಿಸಿಕಸವಲೇವಾರಿಮಾಡುವ ವಿಚಾರ ಚರ್ಚೆಯಲ್ಲಿದೆ. ಕಸದ ಸಮಸ್ಯೆ ಈ ಕೆಳಗೆ ಕೊಟ್ಟಿದೆ ೧. ಕಸದ ಮೂಲ -ಯಾವ ಮೂಲದಿಂದ -ಎಷ್ಟು ಶೇಕಡಾವಾರು ಬೆಂಗಳೂರು-ವಿವರ:- ಭಾರತದಕೆಲವು ದೊಡ್ಡ ನಗರಗಳ ಕಸ ನಿರ್ವಹಣೆ ಖರ್ಚು. ಮೇಲಿನ ವಿವರ ನೋಡಿದಾಗ ಬೆಂಗಳೂರಿನ ಕಸ ವಿಲೇವಾರಿ ವೆಚ್ಚ ಉಳಿದ ನಗರಗಳಿಗಿಂತ ಅಧಿಕವಾಗಿರುವುದು ಕಾಣುವುದು. ತ್ಯಾಜ್ಯ/ಕಸ ವಿಲೇವಾರಿ -ಗ್ರಾಮಗಳು == ಮುಂದಿನ ವರ್ಷಗಳಲ್ಲಿ ಕಸದ ಸಮಸ್ಯೆ == ಮುಂದಿನ ವರ್ಷಗಳಲ್ಲಿ ಕಸದ ಸಮಸ್ಯೆ-ಅಂದಾಜು ಕಸದ ಮೂಲ -ಯಾವ ಮೂಲದಿಂದ -ಎಷ್ಟು ಶೇಕಡಾವಾರು == ಸಂಚಾರ ದಟ್ಟಣೆ ಕಾರಣ ನಷ್ಟ == ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆಯಿಂದಾಗಿ ವರ್ಷಕ್ಕೆ ರೂ.3,700 ಕೋಟಿಯಷ್ಟು ನಷ್ಟ ಉಂಟಾಗುತ್ತಿದೆ. ಸಂಚಾರ ದಟ್ಟಣೆ ಅವಧಿಯಲ್ಲಿ 2.8 ಲಕ್ಷ ಲೀಟರ್‌ನಷ್ಟು ಇಂಧನ ವ್ಯರ್ಥವಾಗುತ್ತಿದ್ದು, ವರ್ಷಕ್ಕೆ 50 ಕೋಟಿ ಲೀಟರ್‌ಗಳಷ್ಟು ಇಂಧನವನ್ನು ಕಳೆದುಕೊಳ್ಳಬೇಕಾಗಿದೆ! ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಪರಿಷ್ಕೃತ ನಗರ ಮಹಾಯೋಜನೆ 2031 ನ್ನು ಸಿದ್ಧಪಡಿಸಲು ನಡೆಸಿರುವ ಅಧ್ಯಯನದ ವರದಿಯಲ್ಲಿ ಈ ಅಂಶಗಳಿವೆ. ಸಂಚಾರ ದಟ್ಟಣೆ ಅವಧಿಯಲ್ಲಿ ವ್ಯರ್ಥವಾಗುವ ಇಂಧನದಿಂದ ವರ್ಷಕ್ಕೆ ರೂ. 1,350 ಕೋಟಿಗಳಷ್ಟು ನಷ್ಟ ಉಂಟಾಗುತ್ತಿದೆ. ಈ ಸಮಸ್ಯೆಯಿಂದ ಜನರ ಮೇಲಾಗುತ್ತಿರುವ ದುಷ್ಪರಿಣಾಮ ಖಾಸಗಿ ವಾಹನಗಳ ಬಳಕೆ ಮತ್ತಷ್ಟು ಹೆಚ್ಚಲು ಕಾರಣವಾಗುತ್ತಿದೆ. ಇದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುತ್ತಿದೆ ಎಂದು ವಿಶ್ಲೇಷಿಸಿದೆ. ಸಂಚಾರ ಸಮಸ್ಯೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಸಲುವಾಗಿ ಹಾಗೂ ಭವಿಷ್ಯದಲ್ಲಿ ಸೂಕ್ತ ಸಂಚಾರ ಮಾದರಿಯನ್ನು ಅಳವಡಿಸಿಕೊಳ್ಳುವ ಸಲುವಾಗಿ ಮೊದಲ ಬಾರಿಗೆ 500 ವಲಯಗಳನ್ನು ಒಳಗೊಂಡ ಸಂಚಾರ ಮಾದರಿಯನ್ನು ಅಭಿವೃದ್ಧಿಪಡಿಸಿದೆ.ಪರಿಷ್ಕೃತ ಮಹಾಯೋಜನೆ ರೂಪಿಸುವ ಸಲುವಾಗಿ ವಿವಿಧ ಮೂಲಗಳಿಂದ ದತ್ತಾಂಶವನ್ನು ಕಲೆಹಾಕಿ, ಸಂಚಾರ ಮಾದರಿಗಳನ್ನು ರೂಪಿಸಲಾಗಿದೆ. ವಿವಿಧ ಸಮೀಕ್ಷೆಗಳ ದತ್ತಾಂಶಗಳನ್ನಲ್ಲದೇ ಬಿ–ಟ್ರ್ಯಾಕ್‌ ಯೋಜನೆ ಅಡಿ 50 ಕಡೆ ಸ್ಥಾಪಿಸಿದ್ದ ಸಿ.ಸಿ.ಟಿ.ವಿ ಕ್ಯಾಮೆರಾಗಳ ಮೂಲಕವೂ ಮಾಹಿತಿಯನ್ನೂ ಅಧ್ಯಯನಕ್ಕೆ ಬಳಸಲಾಗಿದೆ. ಇತರ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಗಳನ್ನೂ ವಿಸ್ತೃತ ವಿಶ್ಲೇಷಣೆ ನಡೆಸಲಾಗಿದೆ ಎಂದು ಬಿಡಿಎ ಹೇಳಿಕೊಂಡಿದೆ. ಅತ್ಯಾಧುನಿಕ ಸಂಚಾರ ಮಾದರಿ ವಿಶ್ಲೇಷಣೆ ತಂತ್ರಜ್ಞಾನ (ಕ್ಯೂಬ್‌ ವೋಯೆಜರ್‌) ಬಳಸಿ ಭವಿಷ್ಯದ ಸಂಚಾರ ಮಾದರಿಯನ್ನು ರೂಪಿಸಲಾಗಿದೆ. 15 ಸಾವಿರ ಕಿ.ಮೀ.ಗೂ ರಸ್ತೆ ಸಂಪರ್ಕ ಜಾಲದ ವಿಸ್ತೃತ ವಿವರಗಳನ್ನು ಕಲೆಹಾಕುವ ಮೂಲಕ ಪರಿಷ್ಕೃತ ಮಹಾ ಯೊಜನೆಯ ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್‌) ತಂಡ ಸಂಚಾರ ಮಾದರಿಗಳನ್ನು ಸಿದ್ಧಪಡಿಸಿದೆ. ಬಸ್‌ಗಳು ಸಂಚರಿಸುವ 2,300 ಮಾರ್ಗಗಳಿಗೆ ಸಂಕೇತಗಳನ್ನು ಅಳವಡಿಸಿ ಮಾಹಿತಿ ಕಲೆಹಾಕಲಾಗಿದೆ. ಬಿಬಿಎಂಪಿಯ ಎಲ್ಲಾ ವಾರ್ಡ್‌ಗಳು ಹಾಗೂ ಬಿಡಿಎ ವ್ಯಾಪ್ತಿಯ ಎಲ್ಲಾ ಗ್ರಾಮಗಳನ್ನು ಈ ಅಧ್ಯಯನಕ್ಕೆ ಪರಿಗಣಿಸಲಾಗಿದೆ. ಬೆಂಗಳೂರು ಮಹಾನಗರದ ವ್ಯಾಪ್ತಿಯನ್ನೂ ಪರಿಗಣಿಸುವ ಮೂಲಕ ಭವಿಷ್ಯದ ಸಂಚಾರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದೆ ಎಂದು ಬಿಡಿಎ ಹೇಳಿಕೊಂಡಿದೆ. == 60 ಕೋಟಿ ತಾಸು ಕಾಲಹರಣ == ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳುವ ಅಷ್ಟೂ ಜನರು ಒಂದು ವರ್ಷದಲ್ಲಿ ಎಷ್ಟು ಕಾಲಹರಣ ಮಾಡುತ್ತಾರೆ ಎಂಬುದನ್ನೂ ಬಿಡಿಎ ಲೆಕ್ಕ ಹಾಕಿದೆ. ಒಂದು ವರ್ಷದಲ್ಲಿ ನಗರದ ಜನರು ಒಟ್ಟು 60 ಕೋಟಿ ತಾಸುಗಳನ್ನು ರಸ್ತೆಯಲ್ಲೇ ಕಳೆಯುತ್ತಾರೆ. ಈ ರೀತಿ ಮಾನವ ಶ್ರಮ ವ್ಯರ್ಥವಾಗುವುದರಿಂದ ವರ್ಷಕ್ಕೆ ಸುಮಾರು ರೂ. 2,350 ಕೋಟಿ ನಷ್ಟ ಉಂಟಾಗುತ್ತಿದೆ ಎಂಬುದು ಬಿಡಿಎ ಲೆಕ್ಕಾಚಾರ. == ಅಧ್ಯಯನಕ್ಕೆ ಬಳಸಿರುವ ಅಂಶಗಳು == ಸಾಮಾಜಿಕ, ಆರ್ಥಿಕ ಸಮೀಕ್ಷೆಯ (10,130 ನಮೂನೆ ಬಳಕೆ) ವಿವರಗಳು 45 ಕಡೆಗಳಲ್ಲಿ ದಿನದಲ್ಲಿ ಯಾವ ಬಗೆಯ ವಾಹನಗಳು ಎಷ್ಟು ಸಂಖ್ಯೆಯಲ್ಲಿ ಸಂಚರಿಸುತ್ತವೆ ಎಂಬ ಕುರಿತು ನಡೆಸಿದ ಸಮೀಕ್ಷೆಯ ದತ್ತಾಂಶ 13 ಕಡೆಗಳಲ್ಲಿ ನಡೆಸಿರುವ ವಾಹನ ಸಂಚಾರ ಆರಂಭ ಹಾಗೂ ಗುರಿ ತಲುಪುವ ಅವಧಿಯ ಕುರಿತ ಸಮೀಕ್ಷೆ (ಒ.ಡಿ ಸರ್ವೇ) 375 ಕಿ.ಮೀ ಉದ್ದವನ್ನು ಪರಿಗಣಿಸಿ ವೇಗ ಹಾಗೂ ವಿಳಂಬ ಕುರಿತ ಸಮೀಕ್ಷೆ ನಡೆಸಲಾಗಿದೆ. 375 ಕಿ.ಮೀ ಉದ್ದದ ರಸ್ತೆ ಜಾಲವನ್ನು ಪರಿಗಣಿಸಲಾಗಿದೆ 14 ಜಂಕ್ಷನ್‌ಗಳಲ್ಲಿ ವಾಹನ ದಟ್ಟಣೆ ಪರಿಸ್ಥಿತಿಯಲ್ಲಿ ಅಧ್ಯಯನ ನಡೆಸಲಾಗಿದೆ ಸರಕು ಸಾಗಣೆ, ನಗರ ಸಂಚಾರಕ್ಕೆ ಸಂಬಂಧಿಸಿದ ಸಮೀಕ್ಷೆಗಳನ್ನು 8 ಕಡೆ ನಡೆಸಲಾಗಿದೆ == ನೋಡಿ == ನಮ್ಮ ಮೆಟ್ರೊ ಕರ್ನಾಟಕದ ಮಹಾನಗರಪಾಲಿಕೆಗಳು ಬೆಂಗಳೂರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ-೨೦೧೫ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ == ಆಧಾರ == ಕರ್ನಾಟಕ ಚುನಾವಣೆ ಆಯೋಗವರದಿ ಪ್ರಜಾವಾಣಿ ೬-೪-೨೦೧೦ ೧.( ಬಿ.ಬಿ.ಎಂ.ಪಿ. ವಿವರ ಫಲಕ-ಪ್ರ.ವರದಿ);ಪ್ರಜಾವಾಣಿ ವರದಿ ೨೧-೬-೨೦೧೪